Tuesday, June 7, 2011

KUMBHA VIVAHA- GURUVAYUR PRASADAM

ON 30-JUNE-11 MONDAY ENTE KUMBHA VIVAHA WAS DONE IN SHANISHWARA TEMPLE MANJESHWARA AT EVENING. IT WAS SO SURPRISE FOR US TO SEE THE KARMAS THEY FOLLOWING. IT WAS REALLY A GUD EXPERIENCE FOR ME. ON NEXT TUESDAY I GET GURUVAYUR PRASADAM THROUGH COURIER AT FIRST TIME. THAT COVER INCLUDES CHANDANAM INSIDE THAT. I LIKED IT LOT. I REALLY GEARTFULL TO MY KANNAN N MOST ONE ANANADAKRISHNAN. HE IS A VERY GUD PERSON REGARDING ME. HAVE A GRACEFUL MIND. I FEEL SOMETIME ITS ONLY THE KANNAS GRACE ON ME TO GET A SUCH PERSONALITY FRIEND IN MY LIFE. I DIDNT SEEN IN BEFORE AND I CANT IN PRESENT AND I WILL NOT SEE IN FUTURE ALSO, THAT WAS THE GREATNESS HE HAS HAVE. BCOZ I DIDNT EXPECTED THAT IN MY LIFE. IS IT HAPPENED ? I REALLY SHOCKED AT FIRST TIME. BUT I WANTED IT EARLIER BUT NO HOPE FOR THOSE WHICH WILL HAPPEN IN MY FUTURE. I THINK KANNA...... HE IS REALLY KNOWN MY MIND. WHATEVER I THOUGHT SHOULB BE LIKE THAT IN MY MIND IT WILL HAPPENED IN LIKE THAT ONLY. SO I M VERY HAPPY KANNA ALWAYS HEARING MY MIND WHAT IT TELL IS.....KANNA U R THE SUPREME ONEEEE

Friday, February 4, 2011

ನನ್ನ ಬದುಕಿನ ಭಾವನೆ



ನಾವು ನಮ್ಮ ಬದುಕು ಸುಂದರವಾಗಿರಬೇಕು ಅಂತ ನಾನು ಅಸೆ ಪಡ್ತೀನಿ . ಮನೆ ಚಿಕ್ಕದಾದರೂ ಪರವಾಗಿಲ್ಲ ಆದರೆ ಚೊಕ್ಕವಾಗಿರಬೇಕು . ಮನೆ ಮುಂದೆ ಒಂದು ತುಳಸಿಕಟ್ಟೆ . ತುಳಸಿಕಟ್ಟೆ ತುಂಬಾ ಹರಡಿರುವ ತುಳಸಿ ಗಿಡ , ನನ್ನ ಪ್ರಕಾರ ಪ್ರತಿಯೊಂದು ಮನೆಗೂ ತುಳಸಿಕಟ್ಟೆ ಹೊನ್ನು ಕಲಶ ವಿದ್ದಂತೆ , ಆ ತುಳಸಿಕಟ್ಟೆ ಯಲ್ಲಿರುವ ತುಳಸಿಗಿಡವನ್ನು ನೋಡಿ ಅ ಮನೆಯ ಅರ್ಥಿಕ ಸ್ಥಿತಿಯನ್ನು ಪರಿಗಣಿಸಬಹುದು. ಮನೆಯ ಸುತ್ತಮುತ್ತ ಹಲವಾರು ಹೂವಿನ ಗಿಡ ಇದ್ದರಂತೂ ಮನೆಯ ಸೌಂದರ್ಯ ಇನ್ನೂ ಇಮ್ಮಡಿಯಾಗಬಹುದು.

ಹಳೆಯ ಕಾಲದ ಮನೆ ನನಗೆ ತುಂಬಾ ಪ್ರೀತಿ ಯಾಕೆಂದರೆ ಗತಕಾಲದ ವೈಭವ ಕಾಣಲಿಕ್ಕೆ ಸಾಧ್ಯ ಅದರಲ್ಲೂ ತುಂಬು ಕುಟುಂಬ ಅಲ್ಲಿರಬೇಕು ತುಂಬಾ ಮಕ್ಕಳು ಒಬ್ಬರು ಅಜ್ಜ ಅಜ್ಜಿ ಮತ್ತಿಬ್ಬರು ಹಿರಿಯರು ಹಾಗೆ ತುಂಬು ಸಂಸಾರ , ಅಲ್ಲಿ ಯಾವುದೇ ನಿರ್ಧಾರವೂ ಸದಸ್ಯರೆಲ್ಲ ಒಮ್ಮತದಿಂದ ಕೂಡಿರುತ್ತದೆ. ಕೂಡು ಕುಟುಂಬ ಇದ್ದಾರೆ ಅಲ್ಲಿ ಯಾವಾಗಲು ಸಂತೋಷದ ವಾತಾವರಣ ಇದ್ದೆ ಇರುತ್ತದೆ . ಈಗ ನನಗೆ ನಮ್ಮ ಅಜ್ಜಿ ಮನೆಯೇ ನೆನಪಾಗುವುದು . ಯಾಕೆಂದರೆ ನಮ್ಮ ಅಜ್ಜಿ ಮನೆ ತುಂಬು ಸದಸ್ಯರ ಕುಟುಂಬ . ನಾನು ಚಿಕ್ಕದಿರುವಾಗ ಅಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಿದ್ದೆ . ನನ್ನ ಅಜ್ಜಿಗೆ 28 ಮಂದಿ ಮೊಮ್ಮಕಳು. ಎಲ್ಲರಲ್ಲೂ ಪ್ರೀತಿನೆ ಅದರಲ್ಲೂ ನನ್ನಲಿ ಅದೇನೋ ಒಂಥರಾ ಎಲ್ಲ ವಿಷಯ ಕರೆದು ಹೇಳುತ್ತಿದ್ದರು . ನನ್ನ ಜೀವನದಲ್ಲಿ ಹಿರಿಯರ ಅನುಭವ ತುಂಬಾನೇ ಇದೆ . ಒಂದು ಸಲ ನಾನು ಆಟವಾಡುತ್ತಿದ್ದಾಗ ಬಿದ್ದು ಪೆಟ್ಟಾಗಿ ನಮ್ಮ ಅಜ್ಜಿನೆ ನನ್ನ ಕೈ ಸರಿ ಮಾಡಿದ್ದು . ವಿಶುವಿನವತ್ತು ಯಾವಾಗಲು ದೇವರ ಆಶೀರ್ವಾದ ಪಡೆದ ಮೇಲೆ ನಮ್ಮ ಅಜ್ಜಿಯ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಿದೆವು . ಆ ಕಾಲ ತುಂಬಾನೇ ಚೆನ್ನಾಗಿತ್ತು . ಅಜ್ಜಿ ಮನೆಯಲ್ಲಿ ಏನು ಸಮಾರಂಭ ನಡೆದರೂ ನಮಗೆಲ್ಲ ಖುಷಿಯೋ ಖುಷಿ . ಯಾಕೆಂದರೆ ನಾವೆಲ್ಲ ಅಂದರೆ ಅಮ್ಮ ,ಪಪ್ಪಾ ,ದೊಡ್ದಮ್ಮಂದಿರು , ದೊದಪ್ಪಂದಿರು, ಚಿಕ್ಕ , ಆಂಟಿಯರು ಎಲ್ಲರೂ ಒಂದೇ ಮನೆಯಲ್ಲಿ ಸೇರುತ್ತಿದ್ದೆವು , ಆಗ ಮನಸ್ಸು ಸಂತೋಷದ ತುತ್ತ ತುದಿಯಲ್ಲಿ ಇರುತ್ತಿದ್ದವು . ಈಗ ಎಲ್ಲವೂ ತುಂಬಾ ಮಿಸ್ ಅಗ್ತೀದೆ .

ಮುಖ್ಯವಾಗಿ ಮನೆಯಷ್ಟೇ ಆ ಮನೆಯ ಸದಸ್ಯರ ಮನಸ್ಸು ಸುಂದರವಾಗಿರಬೇಕು . ಯಾಕೆಂದರೆ ಸುಂದರ ಮನಸ್ಸಿನ ಮೇಲೆ ಸುಂದರ ಬದುಕು ಅವಲಂಬಿತವಾಗಿರುತ್ತದೆ . ಸುಂದರ ಮನಸ್ಸು ಎಂಬುದು ಕೇವಲ ಸಂತನ ಮನಸ್ಸಲ್ಲ. ಅಥವಾ ಕೇವಲ ವಿಜ್ಞಾನಿಯ ಮನಸ್ಸೂ ಅಲ್ಲ. ಪ್ರತಿಯೊಂದು ಸುಂದರ ಮನಸ್ಸೂ ತನಗೆ ತಾನೇ ಮಾದರಿ. ಹಾಗಾಗಿ ಗಾಂಧೀಜಿಯಂಥ ಸುಂದರ ಮನಸ್ಸನ್ನು ಹೊಂದಲು ಗಾಂಧೀಜಿಯನ್ನು ಅನುಕರಿಸುವುದಕ್ಕೆ ಅರ್ಥವಿಲ್ಲ. ಆದರೆ ಗಾಂಧೀಜಿಯ ತಾತ್ವಿಕತೆಯನ್ನು ಅನ್ವಯಿಸಿಕೊಂಡು ಬದುಕಲು ಪ್ರಯತ್ನಿಸುವುದು ನಮ್ಮ ಮನಸ್ಸನ್ನು ಸುಂದರಗೊಳಿಸುತ್ತದೆ.

ನನ್ನ ಬದುಕಲ್ಲಿ ನನಗೆ ಮಾನವ ಜನ್ಮವಾಗಿ ಬದುಕಲು ಅನುಗ್ರಹಿಸಿದ ಆ ಪರಮಾತ್ಮನಿಗೆ ಶ್ರೇಷ್ಠವಾದ ಸ್ಥಾನವಿದೆ, ಒಳ್ಳೆಯ ಭಕ್ತಿಯಿದೆ , ಗೌರವವಿದೆ . ಮನೆಯಲ್ಲಿ ಪೂಜಾ ರೂಂ ಪ್ರತ್ಯೇಕವಿದ್ದರೆ ತುಂಬಾ ಅನುಕೂಲ. ಬೆಳಿಗ್ಗೆ ಮತ್ತು ಸಂಧ್ಯಾ ಸಮಯದಲ್ಲಿ ದೀಪವಿಡುವುದು ಸಂಪ್ರದಾಯ . ಆದರೆ ಅದನ್ನು ಆಯಾ ಸಮಯದಲ್ಲಿ ಪಾಲಿಸಿದರೆನೆ ಅದಕ್ಕೆ ಮಹತ್ವ ವಿರುವುದು. ಆ ಸಮಯದಲ್ಲಿ ಅಗೋಚರವಾದ ಶಕ್ತಿ ಮನೆಯ ನಾಲ್ಕು ಕೇಂದ್ರಗಳಲ್ಲೂ ಎಚ್ಚರವಾಗಿ ನಮ್ಮನ್ನು ಹರಸುತ್ತಿದೆಯಂತೆ . ಅದಕ್ಕೆ ಹಿರಿಯರೂ ಹೇಳುವದು ಕೆಟ್ಟ ಪದ ಬಳಸಬಾರದು ಆ ಸಮಯದಲ್ಲಿ ಅಂತ . ಯಾಕೆಂದರೆ ಕೆಟ್ಟ ಪದ ಬಳಕೆ ಮಾಡಿದಾಗಲೂ ಆ ಶಕ್ತಿ ಹಾಗೆಯೆ ಅಗಲಿ ಎಂದು ಹರಸಿದರೆ ಕೆಟ್ಟದು ಬರದಿರುತ್ತದೆಯೇ ? ಸಮಯ ಸಿಕ್ಕಾಗ ಧ್ಯಾನ meditation ಮಾಡ್ತೀನಿ . ಆಮೇಲೆ ಪ್ರಾಣಯಾಮ ಮಾಡ್ತೀನಿ . ಇದರಿಂದ ನನ್ನಗೆ ಒಳ್ಳೆಯ ಆರೋಗ್ಯವೂ ಮಾನಸಿಕ ನೆಮ್ಮದಿಯೂ ದೊರಕುತ್ತ ಇದೆ .ನಾವು ಮಾಡುವ ಸಂಪ್ರದಾಯವನ್ನು ನಾವು ಯಾವತ್ತು ಮುರಿಯಬಾರದು . ಯಾಕೆಂದರೆ ನಮ್ಮ ಮುಂದಿನ ಪೀಳಿಗೆಗೆ ಅದು ಮಾದರಿಯಾಗಬೇಕು . ನಾವು ಮಾಡಿದನ್ನೇ ಅವರು ಅನುಸರಿಸಿ ಕೊಂದು ಹೋಗುವವರು .

ಯಾರೂ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ತಪ್ಪು ಮಾಡಿದರೆ ನಾವು ಅಂದರೆ ತಿಳಿದವರೂ ಕ್ಷಮಿಸಬೇಕು . ಯಾಕೆಂದರೆ ತಪ್ಪು ಮಾಡುವುದು ಮನುಷ್ಯನ ಸಹಜ ಗುಣ . ಹಾಗಂತ ತಪ್ಪು ಮಾಡುತ್ತಲೇ ಇರುವುದು ಸರಿಯಲ್ಲ "ತಪ್ಪೇ ಮಾಡದವರು ಎಲ್ಲವ್ರೆ ? ತಪ್ಪೇ ಮಾಡದವ್ರು ಹೆಂಗವ್ರೆ ? ಅಂತ ಒಂದು ಪದ್ಯನೆ ಇದೆಯಲ್ವ ? ಕ್ಷಮೆ ಕೇಳೋದಕ್ಕಿಂತಲೂ ಕ್ಷಮೆ ಕೊಡುವುದರಲ್ಲಿ ಏನೋ ಒಂಥರಾ ಸುಖ ಇದೆ , ಆದರೆ ಕೆಲವರಿಗೆ ಅದರ ಅನುಭವ ವಿರುವುದಿಲ್ಲ . ಆಮೇಲೆ ಕೋಪ ಯಾರಿಗೆ ತಾನೇ ಬರಲ್ಲ ಹೇಳಿ ? ಕೋಪ ಬಂದರೆ ಏನು ಮಾಡಬೇಕು ಗೊತ್ತಾ ? ಹಾಗೇನೆ ಸುಮ್ಮನೆ ಇದ್ದುಬಿಡಿ . ಮಾತನಾಡಲು ಹೋದರೆ ಅಲ್ಲಿ ಕುರು ಕ್ಷೇತ್ರನೆ ನಡಿಬಹುದು . ಸಮಯ ಹೋದ ಹಾಗೆ ಕೋಪದ ಬೇಗೆ ಕಡಿಮೆಯಾಗುತ್ತದೆ .ಅದರೆ ನಾವು ಮನುಷ್ಯ ಪ್ರಾಣಿಗೆ ಸೇರಿದವರಾಗಿರುವುದರಿ೦ದ ನಮಗೆ ಬೇರೆ ಪ್ರಾಣಿಗಳಗಿ೦ತ ಬುದ್ದಿಮಟ್ಟ ಜಾಸ್ತಿ ಇರುವುದರಿ೦ದ, ನಾವು ಅದನ್ನು ಸ್ವಲ್ಪ ಪರಿಶೀಲನೆ ಮಾಡಿ ನಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕಾಗಿದೆ.ನಾವು ಬಹಳಷ್ಟು ಸಾರಿ ಹೃದಯ ಮಾತು ಕೇಳಿ ಮೋಸ ಹೊಗಿತ್ತೆವೆ. ಹಾಗ೦ತ ಯಾವಾಗಲು ಮೆದಳಿನ ಮಾತೇ ಕೇಳಬೆಕು ಎ೦ದಲ್ಲ. ಕಷ್ಟ, ದುಃಖ, ಸ೦ತೋಷ, ಸುಃಖ ಹ೦ಚಿಕೊಳ್ಳಬೇಕಾದರೆ ನಾವು ಹೃದಯದ ಮಾತೇ ಕೇಳಬೇಕು.

ಪ್ರೀತಿ ಬಗ್ಗೆ ಏನು ಹೇಳಲಿ ? ನಿಜ ಹೇಳಬೇಕೆಂದರೆ ಪ್ರೀತಿಯಿಂದ ಏನನ್ನು ಗೆಲ್ಲಬಹುದು , ದ್ವೇಷವನ್ನು ಕೂಡ . ಹಾಗಾಗಿ ನಾವು ಎಲ್ಲವನ್ನು ಪ್ರೀತಿಸಬೇಕು ಅದು ಮನುಷ್ಯ ರೂಪವಾಗಿರಲಿ ಅಥವಾ ಯಾವುದೇ ವಸ್ತುವಿನ ರೂಪವಾಗಿರಲಿ . ಮನುಷ್ಯ ಮನುಷ್ಯರೊಳಗಿನ ಸಂಬಂಧ ಯಾವತ್ತು ಪ್ರೀತಿಯಿಂದ ಕೂಡಿರಬೇಕು . ಆಗ ಮಾತ್ರ ಸಾಮರಸ್ಯದ ಬದುಕು ನಮ್ಮಿಂದ ಸಾಧ್ಯ. ದೇವರು ಮನುಷ್ಯನಿಗೆ ಬರೀ ಹೃದಯವನ್ನು ಮಾತ್ರ ಕೊಡಲಿಲ್ಲ. ತರ್ಕಿಸಲು ಮೆದುಲು ಮತ್ತು ಸ್ಪಂದಿಸಲು ಮನಸ್ಸು, ಅದರ ಜೊತೆಗೆ ಪಂಚೇಂದ್ರಿಯಗಳನ್ನೂ, ದೇಹವನ್ನು ಕೊಟ್ಟ. ಬಾಳಿನ ಪುಟಗಳು ಮಗುಚಿ ಬೀಳುತ್ತಿದ್ದಂತೆಯೇ ಏರುಪೇರುಗಳು, ಕಷ್ಟ-ದುಃಖಗಳನ್ನು ಎದುರಿಸುವ ತಾಕತ್ತು ಇವೆಲ್ಲ ಕೊಟ್ಟಿದ್ದಾನೆ . ಪ್ರೀತಿಯನ್ನು ಪ್ರೀತಿಯಿಂದ ಮಾತ್ರ ಗಳಿಸಬಹುದು. ಕೋಪದ ಕೂಪದಿಂದ ಪ್ರೀತಿಯನ್ನು ಗಳಿಸುವುದು ಅಸಾಧ್ಯವಾದಮಾತು. ಪ್ರೀತಿಯಿಂದ ಕೋಪವನ್ನು ಗೆಲ್ಲಬಹುದು. ಸಂತೋಷ, ದುಃಖ, ಅಚ್ಚರಿ, ನೋವು ಈ ಎಲ್ಲಾ ಸ್ಥಿತಿಗಳಲ್ಲೂ ಒಂದೇ ತೆರನಗಿದ್ದರೆ ಅದೆಂಥಾ ಬದುಕು?

ಮನುಷ್ಯ ಹುಟ್ಟು-ಸಾವಿನಲ್ಲಿ ಮಾತ್ರ ಒಂಟಿ. ಬದುಕು 'ಸಮೂಹದ' ಮದ್ಯೆಯೇ ಸಾಗುತ್ತದೆ. ಬಸ್ಸು ಹತ್ತುವಾಗ, ಬೀದಿಯಲ್ಲಿ, ಕಋಏರಿಯಲ್ಲಿ, ಹಾದಿಯಲ್ಲಿ, ವಿದ್ಯಾ ಕೇಂದ್ರಗಳಲ್ಲಿ ಸದಾ ನಮ್ಮೊಂದಿಗೆ ಇರುವವರೆಲ್ಲಾ ಬೇರೆ-ಬೇರೆಯಗುತ್ತಾರೆ. ಅವರೀಲ್ಲಾ ನಮ್ಮ ಸ್ವಂತ ಜನ ಅಲ್ಲದಿರಬಹುದು, ಆಗಿರಲೂಬಹುದು. ಜೀವನ ಪೂರ್ತಿ ನಮ್ಮೊಂದಿಗೆ ಇರುವವರಲ್ಲ.ಹೀಗೆಂದು ನಾವು ಸಮಾಜದಲ್ಲಿ ಬಾಳಲು ತಾಳ್ಮೆ ಅತ್ಯಗತ್ಯ. ವಾಸ್ತವಿಕತೆಯನ್ನು ಒಪ್ಪಿಕೊಂಡು ಇತರರ ಬಗ್ಗೆ ನಿರೀಕ್ಷೆಗಳನ್ನು ಕಡಿಮೆ ಮಡುಕೊಂಡು ಬದುಕುವುದು ಕಲಿತುಕೊಂಡರೆ'ಕೋಪ' ಎಂಬ 'ಕೂಪ'ದಿಂದ ಹೊರಗೆ ಬರಬಹುದು. ಮನಸ್ಸನ್ನು ಆರಾಮವಾಗಿಟ್ಟು ನಿಸರ್ಗದ ಸೊಬಗನ್ನು ಸವಿಯುತ್ತಾ ಸತ್ಯಾಸತ್ಯಗಳನ್ನು ಕೇಳಿಕಂಡು ಅರಿತು, ಯಾರಿಗೂ ಹೊರೆಯಾಗದೆ ಬದುಕಬೇಕು.

Thursday, February 3, 2011

ನನ್ನ ಬಾಳಿನಲ್ಲಿ "ನಂದನಂ"



ನಾನು ಮತ್ತು ನಂದನಂ ಅದರಲ್ಲಿ ಏನೋ ವಿಶೇಷತೆ ಅಡಗಿದೆ ಅಂತ ನನಗೆ ಅನಿಸುತ್ತಿದೆ . ಎಷ್ಟು ಸಲ ನೋಡಿದರೂ ಇನ್ನೂ ನೋಡಬೇಕೆನ್ನುವ ಹಂಬಲ. ಅದರಲ್ಲಿ ಬರುವ ಬಾಲಮಣಿ ಹಾಗೂ ಉನ್ನಿ ಪಾತ್ರ ತುಂಬಾನೇ ಪ್ರಿಯವಾದುದು . ನನ್ನ ಮನೆಗೂ ನಂದನಂ ಹೆಸರಿದಬೇಕೆನ್ನುವ ಹುಚ್ಚು ಅಸೆ . ಅದು ನನಸಾಗುತ್ತೋ ಇಲ್ಲವೋ ಗೊತ್ತಿಲ್ಲ ಅದರೂ ನಾನು ಎಲ್ಲೇ ಇದ್ದರೂ ಅದು ನಂದನಂ ಆಗಿಯೇ ಪರಿವರ್ತಿಸುತ್ತೇನೆ ಅಂತ ನನಗೆ ಅನ್ನಿಸುತ್ತಿದೆ .

Ente Baalmanikkoru Baalaunni




Kanna oruppad naalayi njan nammude Baalamaniyude karyangal anweshikkan thodangit, Kannan engane anugrahichu ennu. Randu divasa munpu njan arinju, navya kuttik oru unni kunji janichu enna karya athan november 22 n trivendrumil ayirinnu. Ennit itha ippo per idunna chadangu kanhinju, enthoru manoharamaaya per "SAIKRISHNA" oruppad isthapettu. Navyeyum Nannayittundetto. Enik uttiri santhoshamyi, kunji vave a cheriya kannu kondu nokunna a photo nannyittund, Annu njan "NANDANAM" film kandu enthoru co-incident anu ith ennu njan aloyichu. Anugrahikatte...... Anugrahikatte......

ಸಕಲ ಕಲ ವಲ್ಲಭ ಮೈಕ್ರೋವೇವ್ ಓವನ್


ಮೈಕ್ರೋವೇವ್ ಓವೆನ್ ಇಂದಿನ ದಿನಗಳಲ್ಲಿ ಆಧುನಿಕ ಅಡುಗೆಮನೆಗಳ ಅವಿಭಾಜ್ಯ ಅಂಗವಾಗಿದೆ. ಗೃಹಿಣಿಯರಿಗೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ಅಮ್ಮನ ಅಡುಗೆಯ ರುಚಿ ಇಲ್ಲದೆ ಹೊರಗಡೆ ಕೆಲಸಕ್ಕೆ ಹೋಗುವವರಿಗೆ, ಓದಲು ಬಂದ ಹುಡುಗರಿಗೆ ಮತ್ತು ಎಲ್ಲ ವಯೋಮಾನದವರಿಗೂ ಇದೊಂದು ವರದಾನವೇ ಸರಿ. ಬರಿ ಬಿಸಿ ಮಾಡಲು ಉಪಯೋಗಿಸುವುದಕ್ಕಿಂತ ಎಲ್ಲ ರೀತಿಯಲ್ಲಿ ಎಲ್ಲರಿಗೂ ಉಪಯೋಗವಾಗಲಿ ಎಂದು ಓವೆನ್ ನ ಬಗ್ಗೆ ತಿಳಿಯದೆ ಇರುವವರಿಗೆ ಸ್ವಲ್ಪ ಮಾಹಿತಿಗಳು.

* ಕರಿಬೇವನ್ನು ಓವೆನ್ ನಲ್ಲಿ 4-5 ನಿಮಿಷ ಇಡಿ. ಗರಿಗರಿಯಾಗಿ ಒಣಗಿದ ಮೇಲೆ ಕೈಯಲ್ಲಿ ಪುಡಿ ಮಾಡಿಟ್ಟುಕೊಂಡು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಬೇಕಾದ ಎಲ್ಲ ಅಡುಗೆಗಳಿಗೆ ಅದನ್ನು ಒಂದೆರಡು ಚಮಚ ಹಾಕಿ. ಆರೋಗ್ಯಕ್ಕೂ ಒಳ್ಳೆಯದು. ಕರಿಬೇವು ಇಲ್ಲ ಎಂದು ಪೇಚಾಡುವುದು ಬೇಡ.

* ಕೆಂಪು ಮೆಣಸಿನಕಾಯಿಯನ್ನು ಒಂದು ನಿಮಿಷ ಓವೆನ್ ನಲ್ಲಿಡಿ. ಗರಿಗರಿಯಾಗುವುದು. ಬಿಸಿಲಲ್ಲಿ ಒಣಗಿಸುವುದೇ ಬೇಕಾಗೋಲ್ಲ.

* ಬಿಸ್ಕೆಟ್ಸ್, ಚೌಚೌ, ಪುರಿ ಹೀಗೆ ಕೆಲವು ಪದಾರ್ಥಗಳು ಬೇಗ ಮೆತ್ತಗಾಗುತ್ತವೆ. ಹೀಗೆ ಮೆತ್ತಗಾದವನ್ನು ಓವೆನ್ ನಲ್ಲಿ ಒಂದು ನಿಮಿಷಕ್ಕೆ ಇಡಿ. ಮತ್ತೆ ಹೊಸದರಂತೆ ಗರಿ ಗರಿಯಾಗುವವು. ತೇವವಾಗಿರುವ ಉಪ್ಪನ್ನು ಕೂಡಾ ಇಡಬಹುದು.

* ಹಪ್ಪಳವನ್ನು ಎಣ್ಣೆಯಲ್ಲಿ ಕರಿಯುವುದಕ್ಕಿಂತ ಓವೆನ್ನಲ್ಲಿ ಒಂದು ನಿಮಿಷ ಇಡಿ. ಕರಿದ ಹಪ್ಪಳ ಬೇಡ ಎನ್ನುವವರು ದಾರಾಳವಾಗಿ ತಿನ್ನಬಹುದು.

* ಮಿಕ್ಕ ಉಪ್ಪಿಟ್ಟು, ಪಲಾವ್ , ಭಾತ್, ಹೀಗೆ ಮಿಕ್ಕ ಆಹಾರ ಪದಾರ್ಥಗಳು ತಣ್ಣಗಾಗಿದ್ದರೆ ಓವೆನ್ನಲ್ಲಿ ಒಂದು ನಿಮಿಷಕ್ಕೆ ಮಾಡಿ ತಣ್ಣಗಾದ ಅಡುಗೆ ಮತ್ತೆ ಬಿಸಿ ಬಿಸಿಯಾಗಿ ತಿನ್ನಲು ರೆಡಿ.

* ಬೀನ್ಸ್ ಪಲ್ಯ, ಎಲೆಕೋಸು, ತೊಂಡೆಕಾಯಿ, ಬೆಂಡೆಕಾಯಿ ಈ ರೀತಿಯ ಪಲ್ಯಗಳನ್ನು ಮಾಡುವಾಗ ಕೈ ಆಡಿಸುತ್ತಲೇ ಇರಬೇಕು. ಸ್ವಲ್ಪ ಬಿಟ್ಟರು ಸೀದು ಹೋಗುವುದು. ಅದಕ್ಕೆ ನೀವು ಮಾಮೂಲಿನಂತೆ ವಗ್ಗರಣೆಯನ್ನು ಮಾಡಿ ಉಪ್ಪು ಎಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಓವೆನ್ ಬಟ್ಟಲಿಗೆ ಹಾಕಿ 5-6 ನಿಮಿಷಕ್ಕೆ ಇಟ್ಟು ಆರಾಮಾಗಿ ಬೇರೆ ಕೆಲಸ ಮಾಡಿಕೊಳ್ಳಿ. ಕೊನೆಗೆ ಕಾಯಿತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ತಳ ಸೀಯುವುದಿಲ್ಲ. ವಿಟಮಿನ್ ಕೂಡಾ ನಷ್ಟವಾಗುವುದಿಲ್ಲ.

* ಹಾಲು, ಕಾಫಿ, ಡಿಕಾಕ್ಷನ್ ಗೆ ನೀರು, ಬಿಸಿ ನೀರು ಬೇಕಾದಲ್ಲಿ ಎಲ್ಲಕ್ಕೂ ಒಂದು ನಿಮಿಷ ಓವೆನ್ ಉಪಯೋಗಿಸಿ. ಬೇಗ ಆಗುವುದು. ಒಲೆ ಅಂಟಿಸುವ ಪ್ರಮೇಯವೇ ಬರುವುದಿಲ್ಲ.

* ತರಕಾರಿಗಳನ್ನು ಹಬೆಯಲ್ಲಿ ಬೇಯಿಸಬೇಕಾದರೆ ಓವೆನ್ ನಲ್ಲೆ ಇಡುವ ಬಟ್ಟಲು ಇರುತ್ತದೆ. ಅದರಲ್ಲಿ ತರಕಾರಿ ಹಾಕಿ 3-4 ನಿಮಿಷ ಬೇಯಿಸಿ. ಹಬೆಯಲ್ಲಿ ಬೇಯಿಸಿದ ತರಕಾರಿ ತಿನ್ನಿ ಎಂದು ವೈದ್ಯರು ಹೇಳಿರುತ್ತಾರೆ. ಹೀಗೆ ಬೇಯಿಸಿಕೊಳ್ಳುವುದು ಸುಲಭ ಕೂಡ.

* ಬೇಯಿಸಿದ ಹಸಿ ಕಡಲೆಕಾಯಿ ಬೀಜದ ವಾಸನೆಯೇ ಎಷ್ಟು ಚೆನ್ನಾಗಿರುತ್ತೆ ಅಲ್ವಾ. ಹಸಿ ಕಡಲೆಕಾಯಿ ಬೀಜ ಇಲ್ಲಾ ಎಂದು ಚಿಂತಿಸಬೇಡಿ. ನಿಮಗೆ ತಿನ್ನಬೇಕೆನಿಸಿದಾಗ ಓವೆನ್ ನ ಒಂದು ಬಟ್ಟಲಿಗೆ ಒಣಗಿದ ಕಡಲೆ ಬೀಜ, ಅದು ಮುಳುಗುವಷ್ಟು ನೀರು ರುಚಿಗೆ ಉಪ್ಪು ಹಾಕಿ 5-6 ನಿಮಿಷಕ್ಕೆ ಇಡಿ. ಘಮ ಘಮಿಸುವ ಹಸಿ ಬೇಯಿಸಿದ ಕಡಲೆ ಬೀಜ ತಿನ್ನಲು ರೆಡಿ.

Wednesday, February 2, 2011

Shubham Sloka


shubhaM karoti kalyaaNaM
aarogyaM dhana saMpadaa
shatrubudhdivinaashaaya diipajyoti namoastute


[ Salute the One who is the lamplight, that brings auspiciousness, prosperity, good health, abundance of wealth, and the destruction of the intellect's enemy ]

Nilanchana Sloka


Neelaanchana Samaabaasam -
Raviputhram Yamaagrajam
Chaayaa Maarthaanda Sambhootham -
Thamnamaami Sanaicharam

[ The one who is blue, one who is like charcoal, one who is the son of Surya and the brother of Yama, one who is born to Chaya and Surya, I prostrate that Saneeswara ]