Monday, December 21, 2009

ಸ್ಪೂರ್ತಿ ಸೆಲೆ

ಕೆಲವರನ್ನು ಕೆಟ್ಟವರೆಂದು ನಿರ್ಧರಿಸಿ ಅವರನ್ನು ದೂರವಿರಿಸುತ್ತೇವೆ . ಶಾಶ್ವತವಾಗಿ ದೂರವಿರಿಸುವಂಥಹ ಕೆಟ್ಟವರು ಯಾರು ಇರುವುದಿಲ್ಲ . ಯಾವ ಸೂರ್ಯ ಬೆಣ್ಣೆ ಕರಗಿಸುತ್ತನೋ , ಅಥೆ ಸೂರ್ಯ ಬೆರಣಿಯನ್ನು ಒಣಗಿಸುತ್ತಾನೆ.

Friday, December 18, 2009

kaNNaa kaNNaa OTi vaa


kaNNaa kaNNaa OTi vaa
uNNikkaNNaa OTi vaa
OTakkuzhalil paaTi vaa
uNNikkaalkonTOTi vaa
kaNNaa kaNNaa OTi vaa

aaTum mayilin piiliyum
aanandamaay gOpiyum
allalakatum chilliyum
anjjanamezhuthiya kaNkaLum
kaNNaa kaNNaa OTi vaa

manjappattuTayaaTay OTa-
rayilkingiNi chaartthiyum
uNNikkaalil chilampumaay
aanandamaay aaTi vaa
kaNNaa kaNNaa OTi vaa

ulakai aLanna dEvanaay
uralil kettiya baalanaay
utthami raadha samEthanaay
ullaasamaay OTivaa
kaNNaa kaNNaa OTi vaa

CHILANKA KETTI


Chilanka ketti odi odi vayo
Ende tamara kanna adi adi vayo…(2)

Ninde pinju padam tedi tedi nyangal
Ninde divya namam padi padi vannen…(2)
Chilanka ketti…

Devaki nandana radhajivana kesava hare madhava
Putana mardana papavinasana kesava hare madhava
Gokula balane odi vayo
Gopala balane adi vayo
Chilanka ketti……

Kamsa vimardana kaliya narttana kesava hare madhava
Asrita vatsala apat bhandhava kesava hare madhava
Omkara nadane odi vayo
Ananda gitame adi vayo
Chilanka ketti…

Pandava rakshaka papa vinasana kesava hare madhava
Arjuna rakshaka anjana nashaka kesava hare madhava
Gitamritame odi vayo
Hridayanandame adi vayo
Chilanka ketti…

ಇನ್ನೂ ಅನೇಕ ಶುಭಾಶಯಗಳು ಕನ್ನಡ-ಗ್ರೀಟಿಂಗ್ಸ್.ಕಾಂ ನಲ್ಲಿ

Save the Cowಗೋವು ಪಾಲನೆಯಿಂದ ಭೂಮಿಯ ಫಲವತ್ತತೆ



ಬೆಳಿಗ್ಗೆ ಎದ್ದು ಸುಮಾರು ಜನ ಇನ್ನೂ ಸರಿಯಾಗಿ ಕಣ್ಣೇ ಬಿಟ್ಟಿರುವುದಿಲ್ಲ. ಆಗಲೇ ಬೇಕು ಬೆಡ್ ಕಾಫಿ. ಕೆಲವರಿಗಂತೂ ಅಟ್ಲೀಸ್ಟ್ ಒಂದು ಕಾಫಿ ಅಥವಾ ಒಂದು ಟೀ ಇಲ್ಲದಿದ್ರೆ ಆ ದಿನ ಅವರ ಪಾಲಿಗೆ ನರಕಸದೃಶ. ಇವೆಲ್ಲ ಸಾಮಾನ್ಯವಾಗಿ ದೊಡ್ಡವರ ವಿಷಯ. ಹಾಗೆಯೇ ನಮ್ಮಂಥ ಮಕ್ಕಳ ಉತ್ತಮ ಬೆಳವಣಿಗೆಗೆ ದಿನಕ್ಕೆ ಒಂದು ಲೋಟ ಹಾಲು ಅಗತ್ಯ. ಹಾಗೆ ನೋಡಿದರೆ ಪ್ರತಿಯೊಬ್ಬ ವ್ಯಕ್ತಿಗೂ ಹಾಲು ಅತ್ಯಗತ್ಯ.

1 ಲೀಟರ್ ಹಾಲು ಬೇಕಾದರೆ ಏನ್ಮಾಡ್ಬೇಕು? ಅಂತ ಪ್ರಶ್ನೆ ಬಂದ್ರೆ "ಅದೇನ್ಮಹಾ! ಬರೀ ಹದಿನೆಂಟು ರೂಪಾಯಿ ಬಿಸಾಕಿದ್ರೆ ಡೈರೀಲಿ ಸಿಗತ್ತಪ್ಪಾ" ಅಂತ ಉತ್ತರ ಕೊಡ್ತೀರಾ. ಕೊಡ್ಬಹುದು. ಆದ್ರೆ ಉತ್ತರ ಸರಿ, ಮಾರ್ಕ್ಸ್ ಸೊನ್ನೆ! ಯಾಕೆಂದ್ರೆ ಹಾಲು ಕೊಡುವ ಹಸುವನ್ನೇ ನಾವು ಉಳಿಸ್ತಿಲ್ಲವಲ್ಲಾ. ಹಸುವೇ ಇಲ್ಲವಾದ ಮೇಲೆ ಎಲ್ಲಿಂದ ಹಾಲು? ಇನ್ನೆಲ್ಲಿಂದ ಡೈರಿ? ಆದ್ರೂ ಒಂದು ಸ್ವಾರಸ್ಯ ಗೊತ್ತಾ? ಜಗತ್ತಿನ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ನಮ್ಮ ಭಾರತಕ್ಕೇ ಕಂಡ್ರೀ! ಏನಿದು ವಿಪರ್ಯಾಸ ಅಂತೀರಾ? ನಾವು ಹಸುಗಳನ್ನು ಬರೀ ಹಾಲು ಕೊಡೋ ಯಂತ್ರ ಎಂದುಕೊಂಡಿದ್ದೇವೆ. ಅದಕ್ಕೇ ನಂ.1. ಹೀಗಾಗಿ ಹಾಲುಕರೆಯುವ ಮಿಷೆನ್ ಹಾಕಿ ರಕ್ತವನ್ನೂ ಹಿಂಡಿ, ಹಿಂಡಿ ಬಿಳಿ ದ್ರವದ ರೀತಿಯಲ್ಲಿ ಹೊರಹಾಕಿ ಹಾಲು ಅಂತಾ ಇದೀವಿ. ಆದ್ರೆ ಒಂದು ವಿಷಯ ಜ್ಞಾಪಕದಲ್ಲಿರಲಿ ಬೆಳ್ಳಗಿದ್ದದ್ದೆಲ್ಲಾ ಹಾಲಲ್ಲ.

ಗೋಮೂತ್ರ:

ಗೋ ಉತ್ಪನ್ನಗಳಲ್ಲಿ ಅತ್ಯಂತ ಹೆಚ್ಚು ಔಷಧೀಯ ಗುಣವುಳ್ಳದ್ದು ಗೋಮೂತ್ರ. ಇದು ಸಸ್ಯಗಳಿಗೆ ತಗುಲುವ ಕೀಟಗಳಿಗೆ ರಾಮಬಾಣ. ಕೆಲವು ಸಸ್ಯಗಳ ಬೀಜಬಿತ್ತನೆಯ ಮೊದಲು ಪುಷ್ಟಿಯುತವಾಗಿ ಬೆಳಿಯಲಿ ಎಂದು ಗೋಮೂತ್ರದಲ್ಲಿ ನೆನೆಸಿಟ್ಟು ನಂತರ ಬಿತ್ತುವ ಪರಿಪಾಠವೂ ಉಂಟು. ಹಾಗೆಯೇ ತಲೆಯಲ್ಲಿನ ಹೊಟ್ಟಿಗೂ ಗೋಮೂತ್ರ ಔಷಧ

ತುಪ್ಪ:

ತುಪ್ಪ ಎಂಬುದು ತೇಜಸ್ಸು ಪ್ರಧಾನ ದ್ರವ್ಯ. ’ಘೃತಂ ತು ಸೌಮ್ಯಂ ಶೀತವೀರ್ಯಂ(ಸುಶ್ರುತ ಸಂಹಿತಾ 179-80)’ ಎಂಬ ಶ್ಲೋಕಗಳಲ್ಲಿ ತುಪ್ಪದ ವಿಶ್ಲೇಷಣೆ ಮಾಡಲಾಗಿದೆ. ಅದರ ಪ್ರಕಾರವಾಗಿ ತುಪ್ಪದಲ್ಲಿ ಸೋಮಾಂಶ ಕಂಡುಬರುತ್ತದೆ. ಇದರಿಂದ ಪಿತ್ತಶಮನ, ಅಗ್ನಿದೀಪಕ ಕಾರ್ಯಗಳು ನಡೆಯುತ್ತವೆ. ಘೃತದ ಪ್ರಭಾವದಿಂದ ಬುದ್ಧಿಶಕ್ತಿ, ಕಾಂತಿ, ಸ್ವರ, ಲಾವಣ್ಯ, ಪರಾಕ್ರಮ, ಓಜೋಗುಣ, ಬಲ ವೃದ್ಧಿಯಾಗುತ್ತದೆ. ಹೀಗಾಗಿ ಘೃತ ಸೇವನೆ ಮಹತ್ವವಾದ ಪಾತ್ರವನ್ನು ವಹಿಸುತ್ತದೆ.

ಮೊಸರು ಮತ್ತು ಮಜ್ಜಿಗೆ:

ಮೊಸರು ಆಯುರ್ವೇದದ ದೃಷ್ಟಿಯಿಂದ ದೇಹಕ್ಕೆ ತುಂಬ ಉಪಯುಕ್ತವಾದದ್ದು. ಆದರೆ ಇದನ್ನು ಹಗಲಲ್ಲೇ ಬಳಸಬೇಕು. ಅದರಿಂದ ಉತ್ಪತ್ತಿಯಾದ ಮಜ್ಜಿಗೆಯೂ ಅಷ್ಟೇ ಮಹತ್ವದ್ದು. ಅದನ್ನೇ ಚರಕಾಚಾರ್ಯರು ತಮ್ಮ ಸಂಹಿತೆಯಲ್ಲಿ ಹೀಗೆ ಹೇಳಿದ್ದಾರೆ ’ನ ತಕ್ರಸೇವಿ ವ್ಯಯತೇ ಕದಾಚಿತ್’ ಎಂಬ ಶ್ಲೋಕದಲ್ಲಿ ಹೇಳಿರುವಂತೆ ದೇವತೆಗಳಿಗೆ ಅಮೃತ ಹೇಗೆ ಹಿತವೋ ಹಾಗೆಯೇ ಮನುಷ್ಯನಿಗೂ ಮಜ್ಜಿಗೆ ಹಿತ.

ಪಂಚಗವ್ಯ:

ಸಗಣಿ, ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪ ಈ ಐದು ಅಂಶಗಳನ್ನೊಳಗೊಂಡ ಪಂಚಗವ್ಯವು ಚರ್ಮ ಮತ್ತು ಮೂಳೆಯ ತೊಂದರೆಗಳನ್ನು ಸರಿಪಡಿಸುವುದು. ಈ ಐದೂ ಅಂಶಗಳನ್ನು ಕ್ರಮವಾಗಿ 4 8 6 5 4 ಅನುಪಾತದಲ್ಲಿ ಬೆರೆಸಲಾಗುತ್ತದೆ. ಇದು ಪವಿತ್ರವಾಗಿದ್ದು, ವೈದಿಕಪದ್ಧತಿಯಲ್ಲಿ ವಿಶಿಷ್ಟ ಪಾತ್ರವನ್ನು ಹೊಂದಿದೆ. ಇವಿಷ್ಟು ಅಂಶಗಳು ಗೋವಿನಿಂದ ಪಡೆಯುವ ಭೌತಿಕ ಉಪಯೋಗಗಳು. ದೈವಿಕ ಸ್ತರದಲ್ಲಿಯೂ ಗೋವಿನ ಪ್ರಭಾವ ಲಕ್ಷಿಸಲ್ಪಟ್ಟಿದೆ

ವೈದಿಕ ದೃಷ್ಟಿ:

ಭಾರತೀಯ ಪರಂಪರೆಯಲ್ಲಿ 33 ದೇವತೆಗಳ ಕಲ್ಪನೆ ಪ್ರಮುಖವಾದುದು. ಭೂಃ, ಭುವಃ, ಸುವಃ, ಜನಃ, ಮಹಃ, ತಪಃ, ಸತ್ಯಂ ಈ ಏಳು ಲೋಕಗಳನ್ನು ವ್ಯಾಪಿಸಿ ಈ ದೇವತಾ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಬ್ರಹ್ಮಾಂಡದಲ್ಲಿರುವ ಈ ಎಲ್ಲಾ ಶಕ್ತಿಗಳು ಪಿಂಡಾಂಡಗಳಲ್ಲೂ ನಿವಿಷ್ಟವಾಗಿರುತ್ತವೆ. ಆದರೆ ಜೀವರಾಶಿಗಳಲ್ಲಿನ ಎಲ್ಲಾ ಪಿಂಡಾಂಡಗಳಿಗೂ (ಶರೀರಗಳಿಗೂ) ಆ ದೇವತಾ ಶಕ್ತಿಗಳನ್ನು ಪ್ರತಿಫಲಿಸುವುದು ಸಾಧ್ಯವಿಲ್ಲ. ಭಗವಂತನ ವರಪ್ರಸಾದದಿಂದ ಹಸುಗಳ ಶರೀರಕ್ಕೆ ದೇವತಾಶಕ್ತಿಗಳನ್ನು ಪ್ರತಿಫಲಿಸುವ ವಿಶಿಷ್ಟ ಶಕ್ತಿಯಿದೆ. ಆಕಳುಗಳ ನಾಡಿಯಲ್ಲಿ ಸೂರ್ಯಸೋಮರ ಔಷಧ ಕಿರಣಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ. ಇದು ಅವುಗಳಿಗೆ ನಿಸರ್ಗದತ್ತ ವರ.

ಪೃಥ್ವಿಯಂತೂ ಸೋಮಸೂರ್ಯರ ಸಂಗಮದಿಂದ ಅಸಂಖ್ಯ ಜೀವರಾಶಿಗಳ ತಾಣವಾಗಿದ್ದಾಳೆ ಭೂಮಿಗೂ ಸಂಸ್ಕೃತ ಭಾಷೆಯಲ್ಲಿ ಗೋ ಎಂಬ ಹೆಸರಿದೆ. ಸೂರ್ಯನಲ್ಲಿರುವ ಸಾತ್ವಿಕ ಕಿರಣಕ್ಕೂ ಈ ಹೆಸರಿರುವುದು ತಿಳಿದುಬರುತ್ತದೆ. ಹಾಗಾಗಿಯೇ ಗಾಯತ್ರೀ ಮಂತ್ರವು ಸೂರ್ಯನಲ್ಲಿತುವ ಭರ್ಗ ಎಂಬ ಕಿರಣದ ಧ್ಯಾನದ ಬಗ್ಗೆ ತಿಳಿಸುತ್ತದೆ. ಈ ಭರ್ಗವೆಂಬ ತೇಜವು ಮಾನವ ಲೋಕಕ್ಕೆ ಹಿತಕರವಾಗಿದೆ. ಅದೇ ಸೂರ್ಯನಿಂದ ಸೋಮಕಿರಣದ ಸಂಪರ್ಕವಿಲ್ಲದಿರುವಾಗ ಭೂಮಿಗೆ ಅಪಾಯಕಾರಿಯಾದ ಕಿರಣಗಳು ಹೊಮ್ಮಿಬರುತ್ತವೆ. ಈ ದೋಷಕ್ಕೆ ಸರ್ಪದೋಷವೆಂದು ಹೆಸರು.

ಈ ದೋಷ ದೂರೀಕರಿಸಲು ಇರುವ ಏಕೈಕ ಉಪಾಯ ಭಾರತೀಯ ತಳಿಯನ್ನು ಪ್ರತಿ ಮನೆಯಲ್ಲಿ ಸಾಕುವುದು. ಇಂತಹ ಗೋವಿನ ಪಂಚಗವ್ಯಗಳನ್ನು ಆಗಾಗ ಪ್ರಾಶನಮಾಡುವುದಾಗಿರುತ್ತದೆ. ನಿಸರ್ಗದಲ್ಲಾದ ವಿವಿಧ ವೈಪರೀತ್ಯಗಳಿಂದ ಕೇಳರಿಯದ, ಕಂಡರಿಯದ ರೋಗಗಳು ಹೆಚ್ಚುತ್ತಿವೆ. ಪಂಚಗವ್ಯದ ಮೇಲೆ ನಡೆದ ವಿಶ್ವ ಮಟ್ಟದ ಸಮ್ಮೇಳನದಲ್ಲಿ ಶುದ್ಧ ಭಾರತೀಯ ತಳಿಯ ಪಂಚಗವ್ಯದ ಮಹತ್ವದ ಬಗ್ಗೆ ಅನೇಕ ವೈಜ್ಞಾನಿಕ ಸತ್ಯಗಳು ಹೊರಹೊಮ್ಮಿವೆ. ಈ ಬೆಳಕಿನಲ್ಲಿ ನಾವು ಗೋವಿನ ವೈಜ್ಞಾನಿಕ ಮಹತ್ವವನ್ನರಿತು ಭಾರತೀಯ ಜಾನಪದ ಸಂಸ್ಕೃತಿಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಸಿದ್ಧರಾಗಬೇಕಾಗಿದೆ.

ತಲೆ ನೋವೆ? ಹಾಗಿದ್ದರೆ ಏಲಕ್ಕಿ ಜಗಿಯಿರಿ!


ಏಲಕ್ಕಿಯನ್ನು ಕೇವಲ ಸುವಾಸನೆಗಾಗಿ ಮಾತ್ರ ಬಳಸುತ್ತಿದ್ದೇವೆ ಎಂದು ಬಹಳಷ್ಟು ಮಂದಿ ಭಾವಿಸುತ್ತಾರೆ. ಆದರೆ ಇದರಲ್ಲಿರುವ ಇತರ ಸದ್ಗುಣಗಳು ಬಹಳಷ್ಟಿವೆ...ಶರ್ಕರ ಪಿಷ್ಟಗಳು, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ ಏಲಕ್ಕಿಯಲ್ಲಿ ಸಮೃದ್ಧವಾಗಿದೆ.

ಜೀರ್ಣಶಕ್ತಿಯನ್ನು ವೃದ್ಧಿಸುವಲ್ಲಿ ಏಲಕ್ಕಿ ಪಾತ್ರ ಅಪಾರ. ಅಜೀರ್ಣ, ಎದೆ ಉರಿ, ವಾತದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ಸಂಜೀವಿನಿ ಇದ್ದಂತೆ. ಏಲಕ್ಕಿಯಿಂದ ಮಾಡಿದ ಚಹಾ ಅಜೀರ್ಣದ ಮೂಲವಾಗಿ ಉಂಟಾಗುವ ತಲೆನೋವಿಗೆ ರಾಮಬಾಣ ಇದ್ದಂತೆ. ಬಾಯಿಯ ದುರ್ವಾಸನೆ ಹೋಗಲಾಡಿಸಿಕೊಳ್ಳಲು ಏಲಕ್ಕಿಗಿಂತ ಉತ್ತಮ ಸುಗಂಧ ಮತ್ತೊಂದಿಲ್ಲ.

ದೈನಂದಿನ ತರಕಾರಿ ಬಳಸುವ ಒಳಗುಟ್ಟುಗಳು




ತರಕಾರಿ ಬಳಸಿ ಆರೋಗ್ಯ ಗಳಿಸಿ ಎನ್ನುವುದು ತರಕಾರಿಯಷ್ಟೇ ಜನಪ್ರಿಯ ಮಾತು. ಆದರೆ ತರಕಾರಿ ಬಳಸುವ ಒಳಗುಟ್ಟುಗಳು ಎಷ್ಟು ಜನಕ್ಕೆ ಗೊತ್ತು ? ತರಕಾರಿ ಬಳಕೆಯ ಕೆಲವು ಕಿವಿಮಾತು..ಇದರಲ್ಲಿ ಕೆಲವು ನೀವು ಮೊದಲೇ ಕೇಳಿದಿರಬಹುದು.ಕೆಲವು ಹೊಸದಿರಬಹುದು ಉಪಯುಕ್ತ ಮಾಹಿತಿ ಎಂದಿಗೂ ಪ್ರಸ್ತುತ ಒಪ್ಪಿಸಿಕೊಳ್ಳಿ

ತರಕಾರಿ ಹಾಗೂ ಆಹಾರ ಸಾಮಗ್ರಿಗಳನ್ನು ಬಳಸುವ ಸುಲಭ ವಿಧಾನಗಳನ್ನು ಮಹಿಳೆಯರು ತಿಳಿದುಕೊಂಡರೆ ಸಮಯವನ್ನು ಉಳಿಸಿಕೊಂಡು ಇನ್ನಿತರೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಅಂಥ ಕೆಲವು ಸುಲಭ ಉಪಾಯಗಳು ನಿಮಗೆ ಗೊತ್ತಾ ?

* ಸೀಮೆ ಬದನೆಕಾಯಿಯನ್ನು ಎರಡು ಭಾಗವಾಗಿ ಹೆಚ್ಚಿ, ಒಂದಕ್ಕೊಂದು ಉಜ್ಜಿ, ನೀರಿಗೆ ಹಾಕಿ ತೆಗೆದು ಉಪಯೋಗಿಸಿ. ಇದರಿಂದ ನಿಮ್ಮ ಕೈ ಅಂಟಾಗುವುದನ್ನು ತಡೆಯಬಹುದು.
* ಬೆಣ್ಣೆ ಕಾಯಿಸಿ ಇಳಿಸುವ ಮುನ್ನ ತೊಟ್ಟು ತೆಗೆದ ಒಂದೆರಡು ವೀಳ್ಯದೆಲೆಯನ್ನು ಅದರಲ್ಲಿ ಹಾಕಿ ತೆಗೆದರೆ ತುಪ್ಪ ಸುವಾಸನೆಯುಕ್ತವಾಗುವುದು.
* ದೊಣ್ಣೆ ಮೆಣಸಿನಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ, ಒಳಭಾಗವನ್ನು ಚಾಕುವಿನಿಂದ ಹೆರೆದು ಕೊಡವಿದರೆ ಬೀಜಗಳೆಲ್ಲ ಉದುರುತ್ತವೆ. ತಿನ್ನುವಾಗ ಹಲ್ಲಿನ ಮಧ್ಯೆ ಬೀಜ ಸಿಕ್ಕಿಕೊಂಡು ತೊಂದರೆಯಾಗದು.
* ಬದನೆಕಾಯಿ ಹೆಚ್ಚಿ ಕೂಡಲೇ ಉಪ್ಪು ನೀರಿಗೆ ಹಾಕಿದರೆ ಹೋಳುಗಳು ಕಪ್ಪಾಗುವುದಿಲ್ಲ.
* ಈರುಳ್ಳಿ ತುದಿಗಳನ್ನು ಕತ್ತರಿಸಿ, ಎರಡು ಭಾಗ ಮಾಡಿ ಒಂದು ಗಂಟೆ ನೀರಿನಲ್ಲಿ ಹಾಕಿಟ್ಟರೆ ಸಿಪ್ಪೆ ಸುಲಿಯುವುದು ಸುಲಭ. ಕಣ್ಣೂ ಉರಿಯುವುದಿಲ್ಲ.
* ಅನ್ನ ಮಾಡುವಾಗ ಅದಕ್ಕೆ ಒಂದು ಚಮಚ ಎಣ್ಣೆ ಅಥವಾ ಸ್ವಲ್ಪ ನಿಂಬೆರಸ ಹಾಕಿದರೆ, ಅನ್ನ ಉದುರುದುರಾಗುತ್ತದೆ.
* ಒಗ್ಗರಣೆ ಹಾಕುವ ಮೊದಲು ಕಡಲೆಕಾಯಿ ಬೀಜವನ್ನು ಮೊದಲು ಹುರಿದು ತೆಗೆದಿಡಿ. ನಂತರ ಸಾಸಿವೆ, ಕರಿಬೇವು ಇತ್ಯಾದಿಗಳನ್ನು ಹುರಿದು ಕಡಲೆಕಾಯಿ ಬೀಜ ಸೇರಿಸಿದರೆ ಹಸಿ ವಾಸನೆ ಇಲ್ಲದೆ ರುಚಿಯಾಗಿರುವುದು.
* ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ಅರಿಷಿಣ, ಉಪ್ಪು ಬೆರೆಸಿದ ನೀರಿನಲ್ಲಿ ಹಾಕಿ. ಸ್ವಲ್ಪ ಹೊತ್ತಿನ ನಂತರ ನೀರನ್ನು ಹಿಂಡಿ ತೆಗೆದರೆ ಕಹಿ ಅಂಶ ಇರುವುದಿಲ್ಲ.
* ಚಟ್ನಿ, ಗೊಜ್ಜಿಗೆ ಬಳಸುವ ಹುಣಸೆ ಹಣ್ಣನ್ನು ಮೊದಲು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ರುಬ್ಬಲು ಸುಲಭವಾಗುವುದು.
* ಕರಿಬೇವನ್ನು ಬೇಳೆಯ ಜತೆಯಲ್ಲೇ ಬೇಯಲು ಇಟ್ಟರೆ ಅದರ ಸಾರವೆಲ್ಲ ಸಾರಿಗೆ ಸೇರಿಕೊಳ್ಳುವುದಲ್ಲದೆ ಸುವಾಸನೆಯೂ ಹೆಚ್ಚುವುದು.
* ಹುರುಳಿಕಾಯಿ, ಗೋರಿಕಾಯಿಗಳನ್ನು ಮಾರುಕಟ್ಟೆಯಿಂದ ತಂದ ಕೂಡಲೇ ನಾರು ಬಿಡಿಸಿಟ್ಟರೆ ಕಾಯಿ ಬಲಿಯದು.
* ಹುರುಳಿಕಾಯಿ ಹಾಗೂ ಗೋರಿಕಾಯಿಗಳನ್ನು ಹುರಿಯುವಾಗ ಒಂದು ಚಿಟಿಕೆ ಉಪ್ಪು ಅಥವಾ ಸಕ್ಕರೆ ಹಾಕಿದರೆ ಅದರ ಹಸಿರು ಬಣ್ಣ ಹಾಗೆಯೇ ಉಳಿಯುವುದು.
* ತಾಜಾ ಹಸಿ ಮೆಣಸಿನಕಾಯಿಯ ತೊಟ್ಟು ಬಿಡಿಸಿಟ್ಟರೆ ಅದು ಬೇಗ ಹಣ್ಣಾಗುವುದಿಲ್ಲ.
* ಮಸಾಲೆ ತಯಾರಿಸುವಾಗ ರುಬ್ಬುವ ಖಾರಕ್ಕೆ ಒಂದೆರಡು ಹಸಿ ಟೊಮೇಟೊ ಹಾಕಿ. ಇದರಿಂದ ಸಾರು ಒಳ್ಳೆಯ ಬಣ್ಣ ಪಡೆಯುವುದಲ್ಲದೆ ರುಚಿ ಹೆಚ್ಚುವುದು.
* ಹಸಿ ಮೆಣಸಿನಕಾಯಿ ಖಾರಕ್ಕೆ ಉಪ್ಪಿನ ಜತೆ ಸ್ವಲ್ಪ ನಿಂಬೆರಸವನ್ನೂ ಹಾಕಿ ತಿರುವಿದರೆ ಬಹಳ ದಿನಗಳವರೆಗೂ ತಿನ್ನಲು ಬಳಸಬಹುದು.
* ಹುರುಳಿಕಾಯಿ, ಗೋರಿಕಾಯಿ, ಕ್ಯಾರೆಟ್‌ಗಳು ಬಾಡಿದ್ದರೆ ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ಹಾಕಿಡಿ. ಮತ್ತೆ ಮೊದಲಿನ ತಾಜಾತನ ಮರಳುವುದು.
* ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಸವರಿಕೊಂಡು ಬೀಟ್‌ರೂಟ್‌ ಹೆಚ್ಚಿದರೆ ಕೈ ಕೆಂಪಾಗದು.
* ಪರಂಗಿ ಹಣ್ಣು ಅಥವಾ ಕಾಯಿ ಹೆಚ್ಚುವಾಗ ಮೊದಲು ಸಿಪ್ಪೆ ತೆಗೆದು ಅನಂತರ ತೊಟ್ಟು ಹಾಗೂ ತುದಿ ತೆಗೆಯಿರಿ. ಇದರಿಂದ ಹಾಲು ಜಿನುಗಿ ಜಾರುವುದು ತಪ್ಪುತ್ತದೆ.
* ಪುದೀನಾ ಚಟ್ನಿ ರುಬ್ಬುವಾಗ ಸ್ವಲ್ಪ ನಿಂಬೆರಸ ಹಾಕಿದರೆ ಚಟ್ನಿಯ ಬಣ್ಣ ಹಸಿರಾಗಿಯೇ ಇರುವುದು.
* ಅಕ್ಕಿರೊಟ್ಟಿ ಮಾಡಲು ಹಿಟ್ಟನ್ನು ಬೇಯಿಸುವಾಗ ಒಂದು ಟೇಬಲ್‌ ಚಮಚ ಚಿರೋಟಿ ರವೆ ಹಾಕಿದರೆ ರೊಟ್ಟಿಯ ಅಂಚು ಸೀಳುವುದಿಲ್ಲ.